ADVERTISEMENT
Monday, August 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

Namratha Rao by Namratha Rao
November 8, 2021
in Cooking, Newsbeat, ಅಡುಗೆ
food
Share on FacebookShare on TwitterShare on WhatsappShare on Telegram

ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

ಹೆಸರುಬೇಳೆಯ ಲಾಡು

ಬೇಕಾಗುವ ಪದಾರ್ಥಗಳು

Related posts

ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ನಾಗೇಂದ್ರ ದೆಹಲಿ ಪ್ರವಾಸ: ಇಡಿ ಕಣ್ಣು ತಪ್ಪಿಸಿ ಓಡಾಡುತ್ತಿರುವ ನಾಗೇಂದ್ರ ವಿರುದ್ಧ ಅಶೋಕ್ ಕಿಡಿ

ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ನಾಗೇಂದ್ರ ದೆಹಲಿ ಪ್ರವಾಸ: ಇಡಿ ಕಣ್ಣು ತಪ್ಪಿಸಿ ಓಡಾಡುತ್ತಿರುವ ನಾಗೇಂದ್ರ ವಿರುದ್ಧ ಅಶೋಕ್ ಕಿಡಿ

August 10, 2026
ರಾಜ್ಯದ ಮಹಿಳೆಯರಿಗೆ ಬಂಪರ್ ನ್ಯೂಸ್: ಗೃಹಲಕ್ಷ್ಮಿ ಯೋಜನೆಯ 32ನೇ ಕಂತಿನ ಹಣ ಬಿಡುಗಡೆ ಖಾತೆಗೆ ಬರೋದು ಯಾವಾಗ?

ರಾಜ್ಯದ ಮಹಿಳೆಯರಿಗೆ ಬಂಪರ್ ನ್ಯೂಸ್: ಗೃಹಲಕ್ಷ್ಮಿ ಯೋಜನೆಯ 32ನೇ ಕಂತಿನ ಹಣ ಬಿಡುಗಡೆ ಖಾತೆಗೆ ಬರೋದು ಯಾವಾಗ?

August 10, 2026

2 ಕಪ್ – ಹೆಸರು ಬೇಳೆ
1/2 ಕಪ್ – ತುಪ್ಪ
1ಕಪ್ – ಸಕ್ಕರೆ
6 – ಏಲಕ್ಕಿ
ಸ್ವಲ್ಪ ಕತ್ತರಿಸಿದ ಗೋಡಂಬಿ

ಮಾಡುವ ವಿಧಾನ

ಮೊದಲು, ಬಾಣಲೆಯನ್ನು ಬಿಸಿ ಮಾಡಿ ಹೆಸರು ಬೇಳೆಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ಹೆಸರು ಬೇಳೆ ಹೊಂಬಣ್ಣಕ್ಕೆ ತಿರುಗುವವರೆಗೆ ಮತ್ತು ಪರಿಮಳ ಬರುವವರೆಗೆ 15 ರಿಂದ 20 ನಿಮಿಷ ‌ಚೆನ್ನಾಗಿ ಹುರಿದು ತೆಗೆಯಿರಿ. ಇದು ತಣ್ಣಗಾದ ಬಳಿಕ‌ ಮಿಕ್ಸಿ ಜಾರಿನಲ್ಲಿ ಹಾಕಿ ನುಣ್ಣಗೆ ಹುಡಿ ಮಾಡಿ. ನಂತರ ಇದನ್ನು ಅಗಲವಾದ ಪಾತ್ರೆಗೆ ಹಾಕಿ. ಇದಕ್ಕೆ ಪುಡಿ ಮಾಡಿದ ಸಕ್ಕರೆ, ಪುಡಿ ಮಾಡಿದ ಏಲಕ್ಕಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ. ಚಿಕ್ಕದಾಗಿ ಕತ್ತರಿಸಿದ ಗೇರು ಬೀಜಗಳನ್ನು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಬೆರೆಸಿ. ಈಗ ಈ ಮಿಶ್ರಣಕ್ಕೆ ಬಿಸಿ ಮಾಡಿದ ತುಪ್ಪವನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ. ಈ ಹಿಟ್ಟಿನಿಂದ ಸಣ್ಣ ಲಿಂಬೆ ಗಾತ್ರದ ಉಂಡೆಗಳನ್ನು ‌ಮಾಡಿ. ಈಗ ಹೆಸರು ಹಿಟ್ಟಿನ ಲಾಡು ಸವಿಯಲು ಸಿದ್ಧವಾಗಿದೆ.

ಸುಲಭವಾಗಿ ಈ ರೀತಿ 10 ನಿಮಿಷದಲ್ಲಿ, ಮಾಡಿ ರುಚಿಕರ ರಸಂ..!

ರೆಸ್ಟೋರೆಂಟ್ ಸ್ಟೈಲ್ ಟಿಫಿನ್ ಸಾಂಬಾರು

ಬೇಕಾಗುವ ಪದಾರ್ಥಗಳು

½ ಕಪ್ ತೊಗರಿ ಬೇಳೆ /
½ ಕಪ್ ಹೆಸರು ಬೇಳೆ
½ ಟೀಸ್ಪೂನ್ ಅರಿಶಿನ ಪುಡಿ

ಸಾಂಬಾರು ಮಸಾಲಾಗೆ

1 ಟೀಸ್ಪೂನ್ ಕಡ್ಲೆಬೇಳೆ
1 ಟೀಸ್ಪೂನ್ ಕೊತ್ತಂಬರಿ ಬೀಜ
1 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಕರಿಮೆಣಸು
8-10 ಕರಿಬೇವಿನ ಸೊಪ್ಪು
1-2 ಟೀಸ್ಪೂನ್ ಮೆಂತ್ಯ
4-5 ಒಣ ಕೆಂಪು ಮೆಣಸು
1-2 ಟೀಸ್ಪೂನ್ ಎಣ್ಣೆ

ಇತರ ಪದಾರ್ಥಗಳು

½ ಕಪ್ ಕತ್ತರಿಸಿದ ಬದನೆಕಾಯಿ
½ ಕಪ್ ಕತ್ತರಿಸಿದ ಈರುಳ್ಳಿ
½ ಕಪ್ ಕತ್ತರಿಸಿದ ಆಲೂಗಡ್ಡೆ
1 ಕಪ್ ಕತ್ತರಿಸಿದ ಟೊಮ್ಯಾಟೊ
1 ಕಪ್ ಮಧ್ಯಮ ಗಾತ್ರದಲ್ಲಿ ಕತ್ತರಿಸಿದ ಕ್ಯಾರೆಟ್
1 ಕಪ್ ಕತ್ತರಿಸಿದ ನುಗ್ಗೆಕಾಯಿ (optional)
¼ ಕಪ್ ಕತ್ತರಿಸಿದ ಕುಂಬಳಕಾಯಿ (optional)
1-2 ಟೀಸ್ಪೂನ್ ಹುಣಸೆಹಣ್ಣಿನ ರಸ
1 ಸಣ್ಣ ತುಂಡು ಬೆಲ್ಲ
1 ಟೀಸ್ಪೂನ್ ಅರಿಶಿನ ಪುಡಿ
½ ಟೀಸ್ಪೂನ್ ಸಾಸಿವೆ
½ ಟೀಸ್ಪೂನ್ ಜೀರಿಗೆ
4-5 ಕರಿಬೇವಿನ ಸೊಪ್ಪು
1 ಟೀಸ್ಪೂನ್ ಉದ್ದಿನ ಬೇಳೆ
ಪಿಂಚ್ ಅಸಫೊಟಿಡಾ / ಹಿಂಗ್
ರುಚಿಗೆ ತಕ್ಕಷ್ಟು ಉಪ್ಪು
1 ಟೀಸ್ಪೂನ್ ಎಣ್ಣೆ

ಮಾಡುವ ‌ವಿಧಾನ

ಸಾಂಬಾರು ಮಸಾಲಾಗೆ

ಸಣ್ಣ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.

ಜೀರಿಗೆ, ಕಡ್ಲೆಬೇಳೆ, ಮೆಂತ್ಯ ಬೀಜ ಸೇರಿಸಿ ಮತ್ತು ಕೆಲವು ಸೆಕೆಂಡುಗಳ ಕಾಲ ಹುರಿದ ನಂತರ ಒಣ ಕೆಂಪು ಮೆಣಸು, ಕರಿಬೇವಿನ ಸೊಪ್ಪು, ಕರಿಮೆಣಸು, ಕೊತ್ತಂಬರಿ ಬೀಜ ಸೇರಿದಂತೆ ಎಲ್ಲಾ ಮಸಾಲಾ ಪದಾರ್ಥಗಳನ್ನು ಸೇರಿಸಿ ಪರಿಮಳ ಬರುವ ತನಕ ಕೆಲವು ನಿಮಿಷಗಳ ಕಾಲ ಹುರಿಯಿರಿ.

ಇದನ್ನು ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ನಂತರ ಅದನ್ನು ಬ್ಲೆಂಡರ್ ಅಥವಾ ಮಿಕ್ಸರ್ ಆಗಿ ನಯವಾಗಿ ನೀರು ಸೇರಿಸದೆ ಪುಡಿ ರೂಪದಲ್ಲಿ ಗ್ರೈಂಡ್ ಮಾಡಿ ಪಕ್ಕಕ್ಕೆ ಇರಿಸಿ.

Saakshatv cooking recipe Restaurant style tiffin sambar

ಎರಡೂ ಬೇಳೆ‌ಗಳನ್ನು 2-3 ಬಾರಿ ತೊಳೆಯಿರಿ. ನಂತರ ಅರಿಶಿನ ಪುಡಿ, ಅಗತ್ಯವಿರುವ ನೀರು (ಸುಮಾರು 2 ಕಪ್) ಸೇರಿಸಿ ತದನಂತರ ಬೇಯಿಸಿ.

ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಜೀರಿಗೆ, ಸಾಸಿವೆ, ಒಣ ಕೆಂಪು ಮೆಣಸು, ಉದ್ದಿನ ಬೇಳೆ, ಕರಿಬೇವಿನ ಸೊಪ್ಪು, ಪಿಂಚ್ ಇಂಗು ಸೇರಿಸಿ, ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.

ಈಗ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ಟೊಮ್ಯಾಟೊ ಸೇರಿಸಿ ಮತ್ತು ಮೃದುವಾಗುವವರೆಗೆ ಮತ್ತೆ ಹುರಿಯಿರಿ.

ನಂತರ ಅದಕ್ಕೆ ಕತ್ತರಿಸಿದ ಎಲ್ಲಾ ತರಕಾರಿಗಳನ್ನು ಸೇರಿಸಿ.‌ ಈಗ ಅದಕ್ಕೆ ತಯಾರಿಸಿ ಇಟ್ಟುಕೊಂಡ ಸಾಂಬಾರು ಮಸಾಲಾ, ಉಪ್ಪು, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣಕ್ಕೆ 1 ಅಥವಾ 1 ½ ಕಪ್ ನೀರು ಸೇರಿಸಿ, ಅದನ್ನು ಕುದಿಸಿ, ಮುಚ್ಚಲ ಮುಚ್ಚಿ ತರಕಾರಿಗಳನ್ನು ಬೇಯಿಸಿ.

ತರಕಾರಿಗಳು ಬೆಂದ ನಂತರ ಹುಣಸೆ ರಸ, ಬೆಲ್ಲ, ಬೇಯಿಸಿದ ಬೇಳೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಅದನ್ನು ಮಧ್ಯಮ ಉರಿಯಲ್ಲಿ 3 – 4 ತನಕ ಕುದಿಸಿ. ರೆಸ್ಟೋರೆಂಟ್ ಸ್ಟೈಲ್ ಟಿಫಿನ್ ಸಾಂಬಾರು ಸಿದ್ಧವಾಗಿದೆ.

ಇದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಈ ಸಾಂಬಾರನ್ನು ಅನ್ನ, ದೋಸೆ, ಇಡ್ಲಿ ಜೊತೆ ಸವಿಯಲು ಚೆನ್ನಾಗಿರುತ್ತದೆ.

ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

ಧಿಡೀರ್ (instant) ಟೊಮೆಟೊ ದೋಸೆ

ಬೇಕಾಗುವ ಪದಾರ್ಥಗಳು

1 ಕಪ್ ಅಕ್ಕಿ
1 ಟೀಸ್ಪೂನ್ ಉದ್ದಿನ ಬೇಳೆ
3 ಟೊಮೆಟೊ
1/2 ಕ್ಯಾರೆಟ್
3 ಒಣಗಿದ ಕೆಂಪು ಮೆಣಸು
8 ಕರಿಬೇವಿನ ಎಲೆಗಳು
1/2 ಇಂಚು ಶುಂಠಿ
3 ಟೀಸ್ಪೂನ್ ತೆಂಗಿನಕಾಯಿ ತುರಿ
ರುಚಿಗೆ ತಕ್ಕಷ್ಟು ಉಪ್ಪು
1/4 ಚಮಚ ಜೀರಿಗೆ
2 ಟೀಸ್ಪೂನ್ ಅಡುಗೆ ಎಣ್ಣೆ

ಮಾಡುವ ವಿಧಾನ

ಮೊದಲು ಅಕ್ಕಿ ಮತ್ತು ಬೇಳೆಯನ್ನು ತೊಳೆದು ‌3 ಗಂಟೆಗಳ ಕಾಲ ನೆನೆಸಿಡಿ. ನಂತರ ಎಲ್ಲಾ ತರಕಾರಿಗಳನ್ನು ಕತ್ತರಿಸಿ ( ಒಣಗಿದ ಕೆಂಪು ಮೆಣಸಿನಕಾಯಿ ಇಲ್ಲದಿದ್ದರೆ 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ ಬಳಸಿ)

ಮೊದಲು ಎಲ್ಲಾ ತರಕಾರಿಗಳು ಮತ್ತು ತೆಂಗಿನಕಾಯಿ ತುರಿಯನ್ನು ನೀರು ಸೇರಿಸದೆ ರುಬ್ಬಿ.

ಇದಕ್ಕೆ ಅಕ್ಕಿ, ಬೇಳೆ ಮತ್ತು ಸ್ವಲ್ಪ ನೀರು ಸೇರಿಸಿ ಮತ್ತೆ ಚೆನ್ನಾಗಿ ರುಬ್ಬಿ.

ನಂತರ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಉಪ್ಪು ಮತ್ತು ಜೀರಿಗೆ ಸೇರಿಸಿ. 30 ನಿಮಿಷಗಳ ಕಾಲ ಹಿಟ್ಟನ್ನು ಹಾಗೆಯೇ ‌ಇಡಿ.

ಬಳಿಕ ದೋಸೆ ಕಾವಲಿಯನ್ನು ಬಿಸಿ ಮಾಡಿ, ಹಿಟ್ಟನ್ನು ಹಾಕಿ ವೃತ್ತಾಕಾರವಾಗಿ ಹರಡಿ. ಮಧ್ಯಮ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ.

ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆಯನ್ನು ಚಿಮುಕಿಸಿ. ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ ತೆಗೆಯಿರಿ. ‌

ತೆಂಗಿನಕಾಯಿ ಚಟ್ನಿ ಅಥವಾ ಪುದೀನ ಚಟ್ನಿಯೊಂದಿಗೆ ಬಿಸಿಯಾದ ದೋಸೆಯನ್ನು ಸವಿಯಿರಿ.

ಸಿಂಪಲ್ , ಟೇಸ್ಟಿ ಅಡುಗೆ ರೆಸಿಪಿಗಳು

ಅನ್ನ ಉಳಿದಿದ್ದರೆ ತಯಾರಿಸಿ ರುಚಿಯಾದ ಕಟ್ಲೆಟ್

ಬೇಕಾಗುವ ಸಾಮಾಗ್ರಿಗಳು‌

1 ½ ಕಪ್ ಉಳಿದ ಅನ್ನ
½ ಕಪ್ ಸಿಪ್ಪೆ ಸುಲಿದ ಮತ್ತು ಕತ್ತರಿಸಿದ ಆಲೂಗಡ್ಡೆ
¼ ಕಪ್ ಕತ್ತರಿಸಿದ ಕ್ಯಾಪ್ಸಿಕಂ
¼ ಕಪ್ ತುರಿದ ಕ್ಯಾರೆಟ್
¼ ಕಪ್ ಸ್ವೀಟ್ ಕಾರ್ನ್
1-2 ಟೀಸ್ಪೂನ್ ಶುಂಠಿ-ಹಸಿರು ಮೆಣಸಿನಕಾಯಿ ಪೇಸ್ಟ್
¼ ಟೀಸ್ಪೂನ್ ಆಮ್ಚೂರ್ ಪೌಡರ್ / ಡ್ರೈ ಮಾವಿನ ಪುಡಿ (optional)
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
½ ಟೀಸ್ಪೂನ್ ಅರಿಶಿನ ಪುಡಿ
1 ಟೀಸ್ಪೂನ್ ಗರಂ ಮಸಾಲ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
1 ಟೀಸ್ಪೂನ್ ಸಕ್ಕರೆ (optional)
2-3 ಟೀಸ್ಪೂನ್ ಕಾರ್ನ್ ಫ್ಲೋರ್
ಹುರಿಯಲು ಎಣ್ಣೆ

ಮಾಡುವ ವಿಧಾನ

ಮೊದಲಿಗೆ ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ.

ಅದರಲ್ಲಿ ಅನ್ನ, ಆಲೂಗಡ್ಡೆ, ತುರಿದ ಕ್ಯಾರೆಟ್, ಶುಂಠಿ-ಹಸಿರು ಮೆಣಸಿನಕಾಯಿ ಪೇಸ್ಟ್, ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಸ್ವೀಟ್ ಕಾರ್ನ್ ಸೇರಿಸಿ.

ಈಗ ಆಮ್ಚೂರ್ ಪೌಡರ್, ಕೆಂಪು ಮೆಣಸಿನ ಪುಡಿ, ಗರಂ ಮಸಾಲ, ಅರಿಶಿನ ಪುಡಿ, ಉಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ.

ಕಾರ್ನ್ ಫ್ಲೋರ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ತೇವವಾಗಿದ್ದರೆ ಸ್ವಲ್ಪ ಕಾರ್ನ್ ಫ್ಲೋರ್ ಸೇರಿಸಿ. ಚೆನ್ನಾಗಿ ನಾದಿ.

ಈಗ ಸಣ್ಣ ನಿಂಬೆ ಗಾತ್ರದ ಚೆಂಡನ್ನು ಮಾಡಿ, ಅದನ್ನು ಚಪ್ಪಟೆ ಮಾಡಿ

ನಂತರ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ‌ಮಾಡಿ. ಎಣ್ಣೆ ಸಾಕಷ್ಟು ಬಿಸಿಯಾದ ನಂತರ, 2-3 ಕಟ್ಲೆಟ್‌ಗಳನ್ನು ಬಿಸಿ ಎಣ್ಣೆಯಲ್ಲಿ ಬಿಡಿ ಮತ್ತು ಎರಡೂ ಬದಿ ಗೋಲ್ಡನ್ ಬ್ರೌನ್ ಆಗುವವರೆಗೆ ಅದನ್ನು ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ.

ಬಿಸಿ ಚಟ್ನಿ ಅಥವಾ ಕೆಚಪ್ ನೊಂದಿಗೆ ಉಳಿದ ಅನ್ನದಿಂದ ತಯಾರಿಸಿದ ಕಟ್ಲೆಟ್‌ಗಳನ್ನು ಸವಿಯಿರಿ.

ಆರೋಗ್ಯದ ಜೊತೆಗೆ ರುಚಿಕರ ರೆಸಿಪಿಗಳು

ನಿಂಬು ಮಸಾಲಾ ಸೋಡಾ

ಬೇಕಾಗುವ ಪದಾರ್ಥಗಳು

3-4 ಕಪ್ ಸೋಡಾ
¼ ಕಪ್ ಸಕ್ಕರೆ
¼ ಕಪ್ ತಾಜಾ ಪುದೀನ ಎಲೆಗಳು
2 ನಿಂಬೆ ರಸ
1 ಟೀಸ್ಪೂನ್ ಜೀರಿಗೆ ಪುಡಿ
¼ ಟೀಸ್ಪೂನ್ ಕರಿಮೆಣಸು ಪುಡಿ
¼ ಚಮಚ ಚಾಟ್ ಮಸಾಲ
½ ಟೀಸ್ಪೂನ್ ಬ್ಲಾಕ್ ಸಾಲ್ಟ್
1 ಟೀಸ್ಪೂನ್ ತುರಿದ ಶುಂಠಿ
2-3 ಪಿಂಚ್ ಉಪ್ಪು
ಐಸ್ ತುಂಡುಗಳು
ಅಲಂಕರಿಸಲು ಕೆಲವು ಪುದೀನ ಎಲೆಗಳು
ಅಲಂಕರಿಸಲು ನಿಂಬೆ ಚೂರುಗಳು
Saakshatv cooking recipe Nimbu masala soda

ಮಾಡುವ ವಿಧಾನ

ಮಿಕ್ಸಿ ಜಾರ್ ತೆಗೆದುಕೊಂಡು ಅದರಲ್ಲಿ ಸಕ್ಕರೆ, ತಾಜಾ ಪುದೀನ ಎಲೆಗಳು, ನಿಂಬೆ ರಸ, ಜೀರಿಗೆ ಪುಡಿ, ಕರಿಮೆಣಸು ಪುಡಿ, ಚಾಟ್ ಮಸಾಲ, ಕಪ್ಪು ಉಪ್ಪು, ಉಪ್ಪು, ಶುಂಠಿ ಮತ್ತು ¼ ಕಪ್ ನೀರು ಸೇರಿಸಿ.

ಎಲ್ಲವನ್ನೂ ಚೆನ್ನಾಗಿ ಗ್ರೈಂಡ್ ಮಾಡಿ ಮತ್ತು ನಯವಾದ ಮಿಶ್ರಣವನ್ನು ‌ತಯಾರಿಸಿ.‌
ಈಗ ಈ ಮಿಶ್ರಣದಿಂದ ರಸವನ್ನು ಸೋಸಿ ತೆಗೆಯಿರಿ.

2-3 ಸರ್ವಿಂಗ್ ಗ್ಲಾಸ್‌ಗಳನ್ನು ತೆಗೆದುಕೊಂಡು, ತಯಾರಾದ ರಸವನ್ನು ಅದಕ್ಕೆ ಸುರಿಯಿರಿ.
Saakshatv cooking recipe Nimbu masala soda

ಅದರಲ್ಲಿ ಸ್ವಲ್ಪ ಪುದೀನ ಎಲೆಗಳು, ನಿಂಬೆ ತುಂಡು ಮತ್ತು ಪುಡಿಮಾಡಿದ ಐಸ್ ಅಥವಾ ಐಸ್ ಕ್ಯೂಬ್‌ಗಳನ್ನು ಸೇರಿಸಿ.

ನಂತರ, ಅದರ ಮೇಲೆ ಸೋಡಾವನ್ನು ಸುರಿದು ಕುಡಿಯಲು ಕೊಡಿ.

ಸಿಂಪಲ್ ಮತ್ತು ಟೇಸ್ಟಿ ಫುಡ್ ರೆಸಿಪಿಗಳು ನಿಮಗಾಗಿ

Tags: #saakshatvbengalurucookingfood recipies
ShareTweetSendShare
Join us on:

Related Posts

ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ನಾಗೇಂದ್ರ ದೆಹಲಿ ಪ್ರವಾಸ: ಇಡಿ ಕಣ್ಣು ತಪ್ಪಿಸಿ ಓಡಾಡುತ್ತಿರುವ ನಾಗೇಂದ್ರ ವಿರುದ್ಧ ಅಶೋಕ್ ಕಿಡಿ

ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ನಾಗೇಂದ್ರ ದೆಹಲಿ ಪ್ರವಾಸ: ಇಡಿ ಕಣ್ಣು ತಪ್ಪಿಸಿ ಓಡಾಡುತ್ತಿರುವ ನಾಗೇಂದ್ರ ವಿರುದ್ಧ ಅಶೋಕ್ ಕಿಡಿ

by Shwetha
August 10, 2026
0

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆ ಎದುರಿಸುತ್ತಿರುವ ಸಚಿವ ಬಿ ನಾಗೇಂದ್ರ ಅವರು ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಗಾಳಿಗೆ ತೂರಿ...

ರಾಜ್ಯದ ಮಹಿಳೆಯರಿಗೆ ಬಂಪರ್ ನ್ಯೂಸ್: ಗೃಹಲಕ್ಷ್ಮಿ ಯೋಜನೆಯ 32ನೇ ಕಂತಿನ ಹಣ ಬಿಡುಗಡೆ ಖಾತೆಗೆ ಬರೋದು ಯಾವಾಗ?

ರಾಜ್ಯದ ಮಹಿಳೆಯರಿಗೆ ಬಂಪರ್ ನ್ಯೂಸ್: ಗೃಹಲಕ್ಷ್ಮಿ ಯೋಜನೆಯ 32ನೇ ಕಂತಿನ ಹಣ ಬಿಡುಗಡೆ ಖಾತೆಗೆ ಬರೋದು ಯಾವಾಗ?

by Shwetha
August 10, 2026
0

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಯೋಜನೆಯ 32ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ...

Gen Z ಪ್ರತಿಭಟನೆಗೆ ನಾನು ಬಲಿಪಶು- ಅಧಿಕಾರ ಹೋದರೂ ಅಂಜದ ರೈತನ ಮಗ: ಒಡಿಶಾದಲ್ಲಿ ಧರ್ಮೇಂದ್ರ ಪ್ರಧಾನ್ ಪವರ್ ಫುಲ್ ಎಂಟ್ರಿ

Gen Z ಪ್ರತಿಭಟನೆಗೆ ನಾನು ಬಲಿಪಶು- ಅಧಿಕಾರ ಹೋದರೂ ಅಂಜದ ರೈತನ ಮಗ: ಒಡಿಶಾದಲ್ಲಿ ಧರ್ಮೇಂದ್ರ ಪ್ರಧಾನ್ ಪವರ್ ಫುಲ್ ಎಂಟ್ರಿ

by Shwetha
August 10, 2026
0

ಭುವನೇಶ್ವರ: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಧರ್ಮೇಂದ್ರ ಪ್ರಧಾನ್ ಅವರು ಇದೀಗ...

ಪರಿಷತ್ ಸಭಾ ನಾಯಕ ಸ್ಥಾನಕ್ಕೆ ಡಾ ಯತೀಂದ್ರ ಸಿದ್ದರಾಮಯ್ಯ ಸಜ್ಜು!: ಸಿದ್ದರಾಮಯ್ಯ ಮುನಿಸು ತಣಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್

ಪರಿಷತ್ ಸಭಾ ನಾಯಕ ಸ್ಥಾನಕ್ಕೆ ಡಾ ಯತೀಂದ್ರ ಸಿದ್ದರಾಮಯ್ಯ ಸಜ್ಜು!: ಸಿದ್ದರಾಮಯ್ಯ ಮುನಿಸು ತಣಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್

by Shwetha
August 10, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇದೀಗ ಮತ್ತೊಂದು ಮಹತ್ವದ ಬೆಳವಣಿಗೆಯಾಗುವ ಮುನ್ಸೂಚನೆ ಸಿಕ್ಕಿದೆ. ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಮೇಲ್ಮನೆಯ...

ತುರ್ತು ಪರಿಸ್ಥಿತಿ ಜಾರಿಗೊಳಿಸದಿದ್ದರೆ ಭಾರತ ಅಂದೇ ಛಿದ್ರವಾಗುತ್ತಿತ್ತು: ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟ ಸಾಬೀತುಪಡಿಸಿದರೆ ಬಿಜೆಪಿಯ ಗುಲಾಮನಾಗುವೆ BK ಹರಿಪ್ರಸಾದ್ ಸವಾಲು

ತುರ್ತು ಪರಿಸ್ಥಿತಿ ಜಾರಿಗೊಳಿಸದಿದ್ದರೆ ಭಾರತ ಅಂದೇ ಛಿದ್ರವಾಗುತ್ತಿತ್ತು: ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟ ಸಾಬೀತುಪಡಿಸಿದರೆ ಬಿಜೆಪಿಯ ಗುಲಾಮನಾಗುವೆ BK ಹರಿಪ್ರಸಾದ್ ಸವಾಲು

by Shwetha
August 10, 2026
0

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಕೆಪಿಸಿಸಿ ನಾಯಕ ಬಿ ಕೆ ಹರಿಪ್ರಸಾದ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಒಂದು ವೇಳೆ ಅಂದು ತುರ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram