‘ಹೊಂಬಾಳೆ’ 11ನೇ ಸಿನಿಮಾ – ಡೈರೆಕ್ಟರ್ – ಹೀರೋ ಇವರೇ..!
ಕೆಜಿಎಫ್ ನಂತಹ ಸೂಪರ್ ಹಿಟ್ ಸಿನಿಮಾ ನೀಡಿ ಇಡೀ ಭಾರತೀಯ ಸಿನಿಮಾರಂಗದ ಗಮನ ಸೆಳೆದಿರುವ ಹೊಂಬಾಳೆ ಫಿಲಮ್ಸ್ ಇದೀಗ ಮತ್ತೊಮ್ಮೆ ‘ಕಿಚ್ಚು’ ಹೊತ್ತಿಸಿದೆ. ಇತ್ತೀಚೆಗಷ್ಟೇ 9ನೇ ಸಿನಿಮಾ ಪುನೀತ್ ರಾಜ್ ಕುಮಾರ್ ಅವರ ದ್ವಿತ್ವ ಸಿನಿಮಾ ಅಪ್ ಡೇಟ್ಸ್ ನೀಡಿತ್ತು.. ಹೊಂಬಾಳೆ ಫಿಲಮ್ಸ್ ನ 10ನೇ ಸಿನಿಮಾದ ಟೈಟಲ್ ಹಾಗೂ ಹೀರೋ ಅನೌನ್ಸ್ ಮಾಡಿತ್ತು.. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿಯಾಗಿ ಬರುತ್ತಿರೋದಾಗಿ ಘೋಷಿಸಿದ್ದ ಹೊಂಬಾಳೆ ಬ್ಯಾಕ್ ಟು ಬ್ಯಾಕ್ ಸಿನಿಪ್ರಿಯರಿಗೆ ಸಿಹಿ ಸುದ್ದಿ ನೀಡ್ತಿದೆ..
ಇದೀಗ 11ನೇ ಸಿನಿಮಾದ ಅಪ್ ಡೇಟ್ಸ್ ನೀಡಿದ್ದು, ಆಗಸ್ಟ್ 6 ಅಂದ್ರೆ ನಾಳೆ ಬೆಳಿಗ್ಗೆ 11 ಗಂಟೆಗೆ ಸಿನಿಮಾದ ಟೈಟಲ್ , ಹೀರೋ ಪರಿಚಯ ಮಾಡಿಕೊಡೋದಾಗಿ ಹೇಳಿ , ಸಸ್ಪೆನ್ಸ್ ನೀಡಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.. ಮತ್ತೊಮ್ಮೆ ಸಿನಿಪ್ರಿಯರ ದೃಷ್ಟಿ ಸ್ಟಾರ್ ನಟರತ್ತ ನೆಟ್ಟಿದೆ.. ಯಾರಿರಬಹುದು ಹೀರೋ ಅನ್ನೋ ಹುಡುಕಾಟದ ನಡುವೆ ಜೋರಾಗಿ ಕೇಳಿಬರುತ್ತಿರೋದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೆಸರು.. ಕಿಚ್ಚು ಅನ್ನೋ ಪದ ಕೇಳ್ತಿದ್ದಂತೆ ಕಿಚ್ಚ ಇರಬಹುದಾ ಅನ್ನೋ ಅನುಮಾನ ಸಹಜವಾಗಿಯೇ ಮೂಡುತ್ತೆ.
ಲೈವ್ ನಲ್ಲಿ ಪ್ರಸಾರವಾಗುವಾಗ್ಲೇ ನಟಿ ಮನೆ ಮೇಲೆ ರೇಡ್ ಮಾಡಿ, ಬಂಧಿಸಿ ಕರೆದೊಯ್ದ ಪೊಲೀಸರು..!
ಇನ್ನೂ ಈ ಸಿನಿಮಾದ ಡೈರೆಕ್ಟರ್ ವಿಭಿನ್ನ ಕಥೆಗಳನ್ನೇ ಆಯ್ದುಕೊಂಡು ಸಿನಿಮಾ ಮಾಡೋ ರಿಷಬ್ ಶೆಟ್ಟಿ ಅವರೇ ಆಗಿರಬಹುದಾ ಅನ್ನೋ ಪ್ರಶ್ನೆ ಕಾಡ್ತಿದೆ. ಇದಕ್ಕೆ ಕಾರಣನೂ ಇದೇ.. ರಿಷಬ್ ಶೆಟ್ಟಿ ಆಗಾಗ ಕಿಚ್ಚ ಸುದೀಪ್ ಅವರ ಜೊತೆಗೆ ಸಿನಿಮಾ ಮಾಡೇ ಮಾಡ್ತಿನಿ ಅಂತ ಹೇಳಿಕೊಂಡಿದ್ದು, ಜೊತೆಗೆ ಸ್ಕ್ರಿಪ್ಟ್ ಕೆಲಸವೂ ಚಾಲ್ತಿಯಲ್ಲಿರುವ ಸುಳಿವು ನೀಡಿದ್ದೂ ಉಂಟು.. ಹೀಗಾಗಿ ಹೊಂಬಾಳೆ 11ನೇ ಸಿನಿಮಾದಲ್ಲಿ ಸುದೀಪ್ – ರಿಷಬ್ ಸೇರಿ ಕಿಚ್ಚು ಹೊತ್ತಿಸಲಿದ್ದಾರಾ ಅನ್ನೋ ಅನುಮಾನ ಮಾಡ್ತಿದೆ..
ಆದ್ರೆ ಯಾರು ನಾಯಕ ಅನ್ನೋದು ನಾಳೆಯೇ ಗೊತ್ತಾಗ್ಬೇಕಿದೆ.. ಆದ್ರೆ ಯಶ್ , ಸುದೀಪ್ , ರಿಷಬ್ ಶೆಟ್ಟಿ ಹೆಸರುಗಳು ಚರ್ಚೆಯಲ್ಲಿದೆ.. ಅಂದ್ಹಾಗೆ ಹೊಂಬಾಳೆ ಪ್ಯಾನ್ ಇಂಡಿಯಾ ಸಿನಿಮಾ , ಬಾಹುಬಲಿ ಪ್ರಭಾಸ್ , ಕಿಂಗ್ ಮೇಕರ್ ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಸಲಾರ್’ ಗೂ ಬಂಡವಾಳ ಹೂಡ್ತಿದೆ.. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯ್ತಿದೆ.. ಆದ್ರೆ ಸಿನಿಮಾದ ಹೊಸ ರಿಲೀಸ್ ದಿನಾಂಕ ಇನ್ನೂ ಅನೌನ್ಸ್ ಆಗಬೇಕಿದೆ.. ಈ ನಡುವೆ ಹೊಂಬಾಳೆ ಬ್ಯಾಕ್ ಟು ಬ್ಯಾಕ್ ಧಮಾಕಾ ನ್ಯೂಸ್ ಕೊಡ್ತಿದೆ..