ಹುಲ್ಲಿನ ಬಣವೆಗೆ ತಗುಲಿದ ಬೆಂಕಿ : ಹುಲ್ಲು ಸುಟ್ಟು ಭಸ್ಮ..!
ಕೋಲಾರ : ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹುಲ್ಲು ಸುಟ್ಟು ಭಸ್ಮವಾಗಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಚಿನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿನ್ನೆಯಷ್ಟೆ 5 ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಇಂದು ಮತ್ತೆ 5 ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿದೆ. ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಹೀಗೆ ದನಕರುಗಳ ಮೇವಿಗೆ ಆಕಸ್ಮಿಕ ಬೆಂಕಿ ಬೀಳ್ತಲೇ ಇದೆ. ಇನ್ನೂ ಬಿಸಿಲು ಹೆಚ್ಚಿರೋದ್ರಿಂದ ಹೀಗೆ ಆಗ್ತಿರಬಹುದು ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೋಲಿಸಿದ ಪಕ್ಷ ನಮ್ಮದು : ಸತೀಶ್ ಜಾರಕಿಹೊಳಿ ಯಾವ ಲೆಕ್ಕ – ಲಕ್ಷ್ಮಣ್ ಸವದಿ
ದಿ. ಜಿ.ರಾಜುಗೌಡರ 17 ನೇ ಪುಣ್ಯ ಸ್ಮರಣೆ ಅಂಗವಾಗಿ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರ ಆಯೋಜನೆ..!
ಬೆಳಗಾವಿ ಲೋಕಸಭಾ ಚುನಾವಣೆ : ಪ್ರಚಾರಕ್ಕೆ ಜಾರಕಿಹೊಳಿ ಬರ್ದರ್ಸ್ ಬರುತ್ತಾರೆ..! – ಶೆಟ್ಟರ್